ಉದುರಿದೆಲೆಗಳು

ಸುರುಳಿ ಸುತ್ತಿಟ್ಟ ಬಾಳಬೀದಿಯ ನೆನಪು ಕೆರಳಿ
ಮರಳಿ ಬಿಚ್ಚಿ ಹೊರಳ ತೊಡಗುತ್ತೇನೆ ಆಗೀಗ;
ಹಳೆಯ ಅರಳಿಮರ
ಹೊಳೆಮೆಟ್ಟಲು
ಗರುಡಗಂಬ
ಚಿಕ್ಕದೊಡ್ಡದ್ದೆಲ್ಲ ಚಿಮ್ಮಿ ನಿಲ್ಲುತ್ತವೆ ಹುಗಿದ ತಳದಿಂದ
ಹುಟ್ಟಿಕೊಳ್ಳುತ್ತದೆ ಸತ್ತ ಗಿಡ
ಸುತ್ತದಡ ನಡುವೆ
ಕತ್ತರಿಸಿ ತೆಗೆದ ಆಕಾಶದಂತೆ ಕಪ್ಪಗೆ
ಬೆತ್ತಲೆ ಮೈಯ ನುಣುಪು ಜಲ

ಬೆತ್ತಲೆ ಮೈಯ ತುಂಗಾನದಿಯ ಪಿಸುದನಿ
ನೆಕ್ಕಿಬಿಡುತ್ತದೆ ಒಳಗೆ ಮೊಳೆಯುತ್ತಿರುವ ಉರಿಯ
ಹೊರಟುಬಿಡುತ್ತದೆ ಮನಸ್ಸು ಹೊಡೆದುಕೊಂಡು ಮೇವಿಗೆ
ಹಿಂಡು ಕುರಿಯ
ಕೂರುತ್ತೇನೆ ದಡದಲ್ಲಿ
ಕಾಲಾಡುತ್ತ ನೀರಲ್ಲಿ
ಕರೆಯುತ್ತೇನೆ ಒಬ್ಬೊಬ್ಬರಾಗಿ
ಕಾಡಿದ ಕೌರವರ ಕೂಡಿದ ಪಾಂಡವರ
ಕರೆಯುತ್ತೇನೆ ಕಂಪು ಕನಸುಗಳನ್ನು
ಎದೆಗೆ ಹಬ್ಬಿದ್ದ ಚೆಲುವೆಯರ
ಆಸೆಗೆ ಆಕೃತಿ ನೀಡಿದ ಅರುಣೋದಯ ಋಣಗಳ
ಆದರಿಸಿ ಆಲಿಂಗನದಲ್ಲಿ ಅಫಜಲರಾದ ನೆಂಟರ
ನಾಲಿಗೆಯಲ್ಲಿ ಜೆಟ್ ಬಿಡುವ ಕಾಲುನಡಿಗೆ ಕುಂಟರ
ಚೈತ್ರವರಳುತ್ತದೆ
ಜ್ಯೇಷ್ಠ ಕೆರಳುತ್ತದೆ.
ಮುಗಿಯುತ್ತದೆ ಮಾಗಿ ತಾಗಿ ಎಲ್ಲ ಕೋಲಾಹಲ
ಬಿಸಿಲು ಬೆಳುದಿಂಗಳೆಲ್ಲ ಜೊತೆಬೆರಳಂತೆ ನಿಂತು
ಒಂದೇ ಕೈಯಾಗಿದೆ ಅವು ಕಾಲೂರಿದ ನೆಲ

ಇಲ್ಲ ಎಲ್ಲ ಅರ್ಥವಾಗುತ್ತದೆ ಈಗ ನನಗೆ
ಬಿಚ್ಚಿ ನಿಲ್ಲುತ್ತವೆ ಪಾತ್ರಗಳೆಲ್ಲ ಗ್ರೀನ್ ರೂಮಿನಲಿ ತಮ್ಮ ತೊಡಿಗೆ
ಒಂದೇ ದಾರದಿಂದ ಆಗಿದೆ ಕಸೂತಿಯ
ಬಗೆಬಗೆ ಚಿತ್ರ, ಹೆಣಿಗೆ
ಸುಖದುಃಖ ಬ್ಯಾಂಡು ಹೊಡೆಯುತ್ತ ಹೊರಟಿದೆ
ವಿವೇಕದ ಮೆರವಣಿಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿ-ಪ್ರೇಮ
Next post ಅಣ್ಣನ ವಿಲಾಪ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys